ಬೆಂಗಳೂರಿನಿಂದ ಹಾಸನಕ್ಕೆ ಆಗಮಿಸಿದ ಗೊಮ್ಮಟೇಶ್ವರ ಎಕ್ಸ್ ಪ್ರೆಸ್ . ಶ್ರವಣಬೆಳಗೊಳ ತಲುಪಿದ ಮೊದಲ ರೈಲು ಸಾವಿರಾರು ಮಂದಿಯಿಂದ ಹರ್ಷೋದ್ಘಾರ, ಶಿಲ್ಲೆ, ಚಪ್ಪಾಳೆ, ಜಯಘೋಷದ ಮೂಲಕ ಸ್ವಾಗತಿಸಿದ ಜನಸ್ತೋಮ . ಶ್ರವಣಬೆಳಗೊಳದಲ್ಲಿ ಸಾವಿರಾರು ಜನರನ್ನು ಹರ್ಷೋದ್ಘಾರದ ಮೂಲಕ ಸ್ವಾಗತಿಸಿದರು. ಸ್ವಾಮೀಜಿ ಪೂರ್ಣ ಕುಂಭ ಸ್ವಾಗತ ಕೋರಿ ಪೂಜೆ ನೆರವೇರಿಸಿದರು. ಎಸ್. ಜಿತೇಂದ್ರಕುಮಾರ್ ರವರು , ಜಿಲ್ಲಾ ಉಸ್ತುವಾರಿ ಸಚಿವ ಏ. ಮಂಜುರವರು , ಮಾಜಿ ಸಚಿವ ಹೆಚ್. ಡಿ. ರೇವಣ್ಣ, ಮುಂತಾದವರು ಹಾಜರಿದ್ದರು.
ಶ್ರವಣಬೆಳಗೊಳದ ರೈಲು ನಿಲ್ದಾಣದಿಂದ ಪೂಜ್ಯ ಸ್ವಸ್ತೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಟಿಕೇಟ್ ಪಡೆದರು. ನಂತರ ಮಾತನಾಡಿದ ಸ್ವಾಮೀಜಿಯವರು. ಹಾಸನ ರೈಲ್ವೇ ಯೋಜನೆ ಯಶಸ್ವಿ ಗೊಳಿಸಲು ಶ್ರಮಿಸಿದ ಮಾಜಿ ಪ್ರಧಾನಮಂತ್ರಿ ಹೆಚ್. ಡಿ. ದೇವೇಗೌಡರು , ಮುಖ್ಯಮಂತ್ರಿ ಸಿದ್ಧರಾಮಯ್ಯ , ರೈಲ್ವೇ ಸಚಿವ ಸುರೇಶ್ ಪ್ರಭು ಹಾಗೂ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ವಂದನೆಗಳೊಂದಿಗೆ ಜ್ವಾಲಾಮಾಲಾ ನ್ಯೂಸ್.














