ಎಸ್. ಎಸ. ಎಂ. ಆರ್ ವಿ ಡಿಗ್ರಿ ಕಾಲೇಜಿನ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ವಿಭಾಗ ಮಟ್ಟದ ತ್ರೋಬಾಲ್ ಹಾಗೂ ರಂಗೋಲಿ ಸ್ಪರ್ಧೆಗಳು ಅಚ್ಚುಕಟ್ಟಾದ ಆಯೋಜನೆ ಮೂಲಕ ನಡೆಯಿತು. ಕಾರ್ಯಕ್ರಮದ ವಿಶೇಷತೆಯಾಗಿ ಧಾರ್ಮಿಕ ಚರ್ಚೆ ಮತ್ತು ಹರಟೆ ಕಾರ್ಯಕ್ರಮ ಖ್ಯಾತ ವಾಗ್ಮಿಗಳಾದ ಮಿನಿರಾಜು ರಂಜಾಳರವರ ನೇತೃತ್ವದಲ್ಲಿ ಆಧ್ಯಾತ್ಮ ಮತ್ತು ಆಧುನಿಕತೆ ವಿಚಾರವಾಗಿ ನಡೆಯಿತು. ಗೋಷ್ಠಿಯಲ್ಲಿ ಡಾ|| ನೀರಜಾ ನಾಗೇಂದ್ರ ಕುಮಾರ್ ರವರು , ಎನ್ . ನಿಹಾಲ್ ರಾಜ್ , ಸುಧಾ ಪಿ. ಜೈನ್ , ಅಭಿನಂದನ್ , ಜಿನೇಂದ್ರ ಹಾಗೂ ಸಂತೋಷ್ ರವರು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದಲ್ಲಿ ಶ್ರೀ ಸುರಂದ್ರ ಕುಮಾರ್ ರವರು ಮತ್ತು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು , ಇ.ಜೆ . ಡೆವಲಪರ್ಸ್ ನ ನಿರಂಜನ್ ಜೈನ್ , ಯುವ ಅಜಿತ್ ರವರು, ಶ್ರೀಮತಿ ಶ್ರದ್ಧಾ ಅಮಿತ್, ಶ್ರೀ ಮೃತ್ಯುಂಜಯ್ ರವರು, ಆರ್ . ಅಶೋಕ್, ಎಸ್. ಅನಿಲ್ ಕುಮಾರ್ ರವರು , ನಿರ್ಮಲ್ ಕುಮಾರ್ ರವರು ಭಾಗವಹಿಸಿದ್ದು ವಿಜೇತರುಗಳಿಗೆ ಪ್ರಶಸ್ತಿ ನೀಡಿದರು. ಇಂತಹ ಅತ್ಯುನ್ನತ ಕಾರ್ಯಕ್ರಮ ಸಮಾಜಕ್ಕೆ ಅತ್ಯವಶ್ಯಕವಾಗಿದ್ದು ನಿರಂತರ ಇಂತಹ ಕಾರ್ಯಕ್ರಮಗಳು ಜರುಗಿತ್ತಿರಲಿ ಎಂಬುದು ನಮ್ಮ ಆಶಯ. ಮತ್ತೆ ಭೇಟಿಯಾಗೋಣ ವಂದನೆಗಳೊಂದಿಗೆ ಜ್ವಾಲಾಮಾಲಾ ಡಾಟ್ ನ್ಯೂಸ್.














