ಇಂದಿನ ಚಿಂತನ ಮಂಥನ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿರುವಂತಹ ಡಾ|| ಸುಜಾತ ಶಾಸ್ತ್ರಿ ಯವರಿಗೆ ಈ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿದ್ದೇವೆ. ಈ ಕಾರ್ಯಕ್ರಮ ಜ್ವಾಲಾಮಾಲಾ ನ್ಯೂಸ್ ಚಾನಲ್ ಮತ್ತು ಭಾರತೀಯ ಜೈನ್ ಮಿಲನ್ ವತಿಯಿಂದ ನಡೆಯುತ್ತಿದ್ದು ನಿಮ್ಮೆಲ್ಲರಿಗೂ ಸ್ವಾಗತವನ್ನು ಕೋರುತ್ತಿದ್ದೇವೆ. ಮೊದಲಿಗೆ ಕಾರ್ಯಕ್ರಮವನ್ನು ಪ್ರಾರ್ಥನೆಯನ್ನು ಮಾಡಲಿದ್ದಾರೆ ಬೆಂಗಳೂರಿನ ಶ್ರೀಮತಿ ಹೀರಾ ಡಿ. ಜೆ ರವರು . ಇದು ಕಳೆದ ಸಂಚಿಕೆಗಳ ಮುಂದುವರೆದ ಭಾಗವಾಗಿದ್ದು ಈ ಕಾರ್ಯಕ್ರಮದ ಚಿಂತನ ಮಂಥನದ ವಿಷಯ ಜೈನ್ ಭೋದಕ ಪತ್ರಿಕೆಯಲ್ಲಿ ಪ್ರಾಚೀನ ಮರಾಠಿ ಜೈನ್ ಗ್ರಂಥದ ಬಗ್ಗೆ. ಈ ಗ್ರಂಥದ ಬಗ್ಗೆ ಶ್ರೀಮತಿ ಸುಜಾತ ಶಾಸ್ತ್ರೀ ಯವರು ಪ್ರಶ್ನಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಕೂಲಂಕುಷವಾಗಿ ವಿವರಿಸಿ ತಿಳಿಸಿಕೊಟ್ಟರು. ಸೊಲ್ಲಾಪುರದಲ್ಲಿರುವ ಜೈನ ಬಸದಿಗಳು ಎಷ್ಟು ಇವೆ ಹಾಗೂ ಅವುಗಳ ವಿಶೇಷತೆ ಏನು ಎಂದು ತಿಳಿಸಿ ಕೊಟ್ಟರು. ಈ ಮೂರು ವಾರಗಳು ನಮ್ಮಲ್ಲಿದ್ದ ಪ್ರಶ್ನೆಗಳಿಗೆ ತುಂಬಾ ಕೂಲಂಕುಷವಾಗಿ ವಿವರಿಸಿ ಕೊಟ್ಟಇವರಿಗೆ ನಮ್ಮಲ್ಲೆರ ಪರವಾಗಿ ತುಂಬಾ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ.
ಕಾರ್ಯಕ್ರಮದ ಕೊನೆಯದಾಗಿ ಶ್ರೀಮತಿ ಹೀರಾ ಜೈನ್ ಇವರಿಂದ ಶಾಂತಿ ಮಂತ್ರ ದೊಂದಿಗೆ ಈ ಕಾರ್ಯಕ್ರಮವನ್ನು ಮುಕ್ತಾಯ ಮಾಡುತ್ತಿದ್ದೇವೆ. ಜೈ ಜಿನೇಂದ್ರ.














