ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ/ ಸದಾಕರ ಹೆಜ್ಜೆ – 01/ ಜ್ವಾಲಾಮಾಲನ್ಯೂಸ್/ 2021

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿಧ್ಯಾನಿಲಯ ಬೃಹತ್ ಸಂಸ್ಥೆ, ಮಾದರಿ ಸಂಸ್ಥೆ. ಉತ್ತರ ಕರ್ನಾಟಕ ಜಿಲ್ಲೆಯ ಆರೋಗ್ಯ ಪರ ಕಾಳಜಿ ಹಾಗೂ ಇಲ್ಲಿ ಉತ್ಕೃಷ್ಟ ವೈದ್ಯರುಗಳು ತಯಾರಾಗ ಬೇಕೆನ್ನುವ ರಾಜಶ್ರೀ ಡಾ|| ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷೆ ಅದನ್ನು ಸಕಾರ ಗೊಳಿಸಲು ಶ್ರಮಿಸುತ್ತಿರುವ ಡಾ|| ನಿರಂಜನ್ ಕುಮಾರ್ ರವರು ಹಾಗೂ ಇಲ್ಲಿ ಮಿಲನ ಗೊಂಡಿರುವ ಅನೇಕ ಸಂಸ್ಥೆಗಳ ಸಮಗ್ರ ನೋಟದೊಂದಿಗೆ ನಾವು ನಿಮ್ಮೊಂದಿಗೆ ಇದ್ದೇವೆ.

ಹೌದು ವೀಕ್ಷಕರೆ ಧರ್ಮವೆಂಬುದು ಮೈದೆಳೆದು ಸ್ವರೂಪ ತಾಳಿತೆಂದರೆ ಅದುವೇ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಪದ್ಮವಿಭೂಷಣ ರಾಜಶ್ರೀ ಡಾ|| ಡಿ ವೀರೇಂದ್ರ ಹೆಗ್ಗಡೆ ಯವರು.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮದ ನೆಲೆಗಟ್ಟಿನಲ್ಲಿ ಜನಸಾಮಾನ್ಯರಿಗೆ ಪರಿಹಾರ ನೀಡುವ ಅನನ್ಯ ಧಾರ್ಮಿಕ ಕೇಂದ್ರವಾಗಿದೆ. ಶಿಕ್ಷಣದ ಮೂಲಕ ಜನರಲ್ಲಿ ನಿಜವಾದ ಧರ್ಮ ಪ್ರಜ್ಞೆ ನೀಡುವುದರ ಸದುದ್ದೇಶದಿಂದ ಬೆಳ್ತಂಗಡಿ ತಾಲ್ಲೂಕಿನಲ್ಲಿ ಆರಂಭವಾಗಿ ಹೀಗಾ ಬೃಹದಾಕಾರದಲ್ಲಿ ಬೆಳೆದು ರಾಜ್ಯದ ಹಲವೆಡೆಗಳಲ್ಲಿ ಮಾದರಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದೆ. ಇಂದಿನ ಧರ್ಮಾಧಿಕಾರಿಗಳ ಪ್ರೇರಣೆ ಮಾರ್ಗ ದರ್ಶನದಂತೆ ಇಂದಿನ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗ್ಗಡೆ ಯವರು ಗುಣಮಟ್ಟದ ಶಿಕ್ಷಣದ ಮೂಲಕ ಸ್ವಸ್ತ್ಯ ಸಮಾಜದ ಕನಸನ್ನು ಹೊತ್ತು ಸಕಾರಗೊಳಿಸಿದ್ದಾರೆ.

ಜೈನರಲ್ಲಿ ಚತುರ್ವಿಧ ದಾನಗಳಿಗೆ ಪ್ರಾಧಾನ್ಯತೆ ನೀಡಲಾಗಿದ್ದು ಪೂಜ್ಯರು ಮೊದಲಿನಿಂದಲ್ಲು ಈ ಮೂಲ ಸೂತ್ರಗಳ ತಳ ಅದಿಯಲ್ಲಿ ಅನೇಕ ಯೋಜನೆಗಳನ್ನು ನಡೆಸುತ್ತಾ ಬಂದ್ದಿದು, ಇವರು ಹೊತ್ತು ನೀಡಿವ ದಾನಗಳಲ್ಲಿ ಔಷದ ಹಾಗೂ ವಿಧ್ಯಾದಾನವು ಸೇರಿದೆ. ಪೂಜ್ಯ ಹೆಗ್ಗಡೆಯವರ ಆಶಯದಂತೆ ಉತ್ಕೃಷ್ಟಮಟ್ಟದ ವಿದ್ಯಾಭ್ಯಾಸದಿಂದ ಗುಣಮಟ್ಟದ ವೈದ್ಯರ ಸೃಷ್ಠಿ, ಉತ್ಕೃಷ್ಟಮಟ್ಟದ ಸೇವೆಗಳಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಅಲ್ಲದೆ ಉತ್ಕೃಷ್ಟ ವಾತಾವರಣದಲ್ಲಿ ಹಾಗ ಬೇಕು ಜನ ಸಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗಬೇಕು ಎನ್ನುವ ಉನ್ನತ ದ್ಯೇಯದೊಂದಿಗೆ ಎದ್ದು ನಿಂತಿದೆ ಈ ಬೃಹತ್ ಸಂಸ್ಥೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾನಿಲಯ ಧಾರವಾಡ.

ಇನ್ನೂ ಈ ಸಂಸ್ಥೆ ದೇಶ ವಿದೇಶಗಳಿಗೆ ಮಾದರಿಯಾದ ಪರಿಯನ್ನು ನಾವು ಹೇಳುತ್ತಾ ಹೋಗುತ್ತೇವೆ. ಪತ್ರಿ ಕ್ಷಣವನ್ನು ತಪ್ಪದೇ ಆಸ್ವಾದಿಸಿ ವೀಕ್ಷಕರೆ.

ನೋದ ಬಡಜನತೆಯ ಸಹಾಯಕ್ಕಾಗಿ ಹುಟ್ಟಿಕೊಂಡ  ಈ ಸಂಸ್ಥೆ ಉತ್ತರ ಕರ್ನಾಟಕದ ಜನರಿಗೆ ವರದಾನವಾಗಿದೆ. ಏಕೆಂದರೆ ಇಲ್ಲಿ ವ್ಯವಹಾರ ಧರ್ಮಕ್ಕಿಂತ ವ್ಯವಹಾರದಲ್ಲಿ ಧರ್ಮವಿದೆ, ವ್ಯವಹಾರದಲ್ಲಿ ಧರ್ಮ ಮಾನವಿಯತೆ ಕಾಳಜಿಯಿಂದ ಕೂಡಿದೆ. ಇದೇ ಶ್ರೇಷ್ಟ ಧರ್ಮವಾಗಿದೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ 2003ರಲ್ಲಿ ಆರಂಭವಾಯಿತು ಎಸ್ ಡಿ ಎಂ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ಆಸ್ಪೆಟಲ್ ಧಾರವಾಡ ಎನ್ನುವ ಸಂಸ್ಥೆ. ಇಂದಿಗೆ ಇಲ್ಲಿನ ಪ್ರಾಂಗಣದಲ್ಲಿ ಮೆಡಿಕಲ್ ವಿಭಾಗದಲ್ಲಿ ಅನೇಕ ಕ್ಷೇತ್ರಗಳು ಸೇರಿದಂತೆ ಡೆಂಟಲ್, ನರ್ಸಿಂಗ್, ಫಿಜೀ಼ಯೋತೆರಫಿ, ರಿಸರ್ಚ್, ಬಯೋ ಮೆಡಿಕಲ್ ಸೈನ್ಸ್, ಸೂಪರ್ ಸ್ಪೇಶಾಲಿಟಿ ಡಿಪಾರ್ಟ್ ಮೆಂಟ್ ಇನ್ನೂ ಅನೇಕ ವಿಭಾಗಗಳು ಸೇರಿವೆ. ಮುಂದಿನ ದಿನಗಳಲ್ಲಿ ಅನೇಕ ವಿಭಾಗಗಳು ಸೇರಲಿವೆ.

ಭವ್ಯ ಭಾರತದಲ್ಲಿ ಅಷ್ಟೇ ಅಲ್ಲದೇ ವಿಶ್ವ ಮಟ್ಟದಲ್ಲಿ ಅತ್ಯುತ್ತಮ ವಿಶ್ವವಿದ್ಯಾನಿಲಯ ಎಂಬ ಹಿರಿಮೆಗೆ ಪಾತ್ರವಾಗಿದೆ. ಹೀಗೊಂದು ಗರಿಮೆ ಸಾಧನೆಯ ಹಾದಿ ಯಶೋಧಾತೆಯನ್ನು ಪೂಜ್ಯರಿಂದಲ್ಲೆ ಕೇಳೋಣ್ಣ ಬನ್ನಿ.

ಜ್ವಾಲಮಾಲ ಸಾಧಕರ ಹೆಜ್ಜೆ ಕಾರ್ಯಕ್ರಮದಲ್ಲಿ ಪೂಜ್ಯ ಡಾ|| ರಾಜ ಶ್ರೀ ವೀರೇಂದ್ರ ಹೆಗ್ಗಡೆಯವರು ನಮ್ಮೊಂದಿಗಿದ್ದಾರೆ.